ಭಸ್ಮಾಸುರ

ಸ್ಥಿತಿ:
ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ
ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ
ಚಟ್ಟ ಸಾಲು ಸಾಲು.
ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ
ಪಾಲು ಮೂರು ಮುಕ್ಕಾಲು

ಕಾರಣ:
ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ
ಸಂವಿಧಾನಶಿವ ಕೊಟ್ಟುಬಿಟ್ಟ ವರ
ಅಸುರನಿಗೆ ಅವಸರ.

ಪರಿಣಾಮ:
ಉಬ್ಬಿನಲಿ ಉಬ್ಬಾಗಿ ಪೆನ್ನಿನಿಂಕೆಲ್ಲ ಮುಗಿಸಿ ತಬ್ಬಿಬ್ಬಾಗಿ
ಕೈಬಾತುಕೊಂಡು ಕಣ್ ಕಣ್ ಬಿಡುವ ಕಲ್ಲಿನಾಥ!
ವರ ಪಡೆದ ಭಸ್ಮಾಸುರನ ಭಂಡ ನಾಟ್ಯದ ತುಳಿತಕ್ಕೆ
ಹಸಿರ ಬಸಿರೊಡೆದ ಕೆಂಪುಕಾವ್ಯ!

ಮುಂದೆ:
ಬರೀ ಗೋಣು ಹಾಕುತ್ತ ಅಪ್ಪನ ಆಲಕ್ಕೆ ನೇಣು ಹಾಕಿಕೊಳ್ಳುತ್ತ
ಕಂಠಪಾಠದ ಭಂಟರಾಗುವ ಅಂಟುರೋಗ
ಇನ್ನಾದರೂ ಸಾಕಪ್ಪ ಸಾಕು.
ವಿಚಾರಮೋಹಿನಿಯ ಮೋಹಕನಾಟ್ಯ ಮಣ್ಣಮಿಡಿತಕ್ಕೆ
ತಕ್ಕಂತೆ ನಡೆಯಬೇಕು.
ಲಾಯಕ್ಕಾದ ಇಂಕು ಒಗ್ಗುವೌಷಧಿಹಾಕಿ ವಾಸ್ತವ್ಯದ
ಹೊಸ ಜೀವ ತುಂಬಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರೇಕ್ಟನ The Caucasian Chalk Circle
Next post ಸಸ್ಯ ಕಾಸಿಯ ಮ್ಯೂಸಿಯಂ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys